ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮರಾದ ದಿನ- ಶಿವಸುಂದರ್

*ಭಗತ್ ಸಿಂಗ್ ಮತ್ತು ಬಾಂಬು*

ಸುಳ್ಳಿನ ಸಂಸತ್ತಿನಲ್ಲಿ

ಭಗತ್ ಸಿಂಗನ ಬಾಂಬು ಸ್ಪೋಟಿಸಲಿ..

ಸೋಗಲಾಡಿ ಪ್ರತಿಮೆಗಳನ್ನು ಉಡಾಯಿಸಲಿ

ಪ್ರತಿಮನದ ಪಡಸಾಲೆಯಲ್ಲಿ..

ಆತ್ಮೀಯರೇ..

ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮರಾದ ದಿನ.

ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮ ದಿನ

ಸದಾ ಬಡಜನರ ಧರ್ಮಾತೀತ ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದ್ದ

*ಭಗತ್ ಸಿಂಗ್ ಹಾಕುತ್ತಿದ್ದ ಘೋಷಣೆ ವಂದೇ ಮಾತರಂ ಅಲ್ಲ*.

 

*ಇಂಕ್ವಿಲಾಬ್ ಜಿಂದಾಬಾದ್*.

*ಹಾಡುತ್ತಿದ್ದ ಹಾಡು ವಂದೇ ಮಾತರಂ ಅಲ್ಲ.*

*ಸರ್ಫಾರೋಷಿಕಿ ತಮನ್ನಾ ..*

ಆದರೆ ತಮ್ಮ ಪಿತಾಮಹ ಸಾವರ್ಕರ್ ರೀತಿ ಭಾರತವನ್ನು ಅಮೇರಿಕಾದ ಗುಲಾಮಿಗೆ ಸಿಲುಕಿಸಿರುವ ಹಿಂದೂತ್ವವಾದಿ ಪ್ರಧಾನಿ ಮೋದಿ ಭಗತ್ ಸಿಂಗ್ ನೆನಪಿನ ದಿನವಾದ ಇಂದು ಆತನ ಹೆಸರನ್ನು….

*ತಮ್ಮ ಕೋಮುವಾದಿ ಮುಸ್ಲಿಂ ದ್ವೇಷಿ ವಂದೇ ಮಾತರಂ ಯೋಜನೆ ಬಳಸಿಕೊಳ್ಳುತ್ತಿರುವುದನ್ನು ನಿಜವಾದ ದೇಶಪ್ರೇಮಿಗಳೆಲ್ಲರೂ ವಿರೋಧಿಸಲೇ ಬೇಕು.*

*ಭಗತ್ ಸಿಂಗ್ ಯಾರು?*

ಭಗತ್ ಸಿಂಗ್ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಮಾತ್ರವಲ್ಲದೆ ಸ್ಥಳೀಯ ಬಂಡವಾಳಶಾಹಿ ಮತ್ತು ಪುರೋಹಿತಶಾಹಿಗಳ ವಿರುದ್ಧವೂ ಸಮರ ಸಾರಿದ್ದ ಕ್ರಾಂತಿಕಾರಿ.

*ಸ್ವಘೋಷಿತ ವೀರ ಸಾವರ್ಕರ್ ತರವಲ್ಲದೆ ತಾನು ಮಾಡಿದ ಕ್ರಾಂತಿಕಾರಿ ಚಟುವಟಿಕೆಗಳ ಹೊಣೆಗಾರಿಕೆಯನ್ನು ತಾನೇ ಹೊತ್ತುಕೊಂದರು. ಸೆರೆಯಲ್ಲಿದ್ದಾಗ ಸಾವರ್ಕರ್ ತರ ಬ್ರಿಟಿಷರಿಗೆ ಸಂಪೂರ್ಣ ಶರಣಾಗಾತಿ ಪಾತ್ರ ಬರೆಯದೆ ನಗುನಗುತಾ ನೇಣಿಗೇರಿ ನೈಜ ಸ್ವಾತಂತ್ರ್ಯದ ಸ್ಪೂರ್ತಿಯಾಗಿದ್ದರು*.

*ಭಗತ್ ಸಿಂಗ್ ಎಂದರೆ ಏನು?*

ವ್ಯಕ್ತಿಯ ಹೆಸರೇನು ?

ಗತಿಸಿದ ಕಾಲವೇನು?

ಭಗತ್ ಸಿಂಗ್ ಎಂದರೆ..

ಪ್ರತಿಯುಗದ ಪ್ರತಿಮನದ

ಪ್ರತಿಕ್ಷಣದ ಕ್ರಾಂತಿಯ ಗಳಿಗೆ..

ಭಗತ್ ಸಿಂಗ್ ಎಂದರೆ..

ಬಿಳಿ ಸುಳ್ಳುಗಳು ಸೃಷ್ಟಿಸುವ

ಬೂದು ಮೌನವನ್ನು

ಬಾಂಬಿನ ಸದ್ದಿನಿಂದ

ಬೇಧಿಸಿದ ಕಡು ಸತ್ಯದ ಕ್ಷಣ .

ಭಗತ್ ಸಿಂಗ್ ಎಂದರೆ..

ಸಂಧಾನ ಸಂಭ್ರಮವನ್ನು

ಕ್ರಾಂತಿಘೋಷಣೆಯು

ಬಯಲು ಮಾಡಿದ ಗಳಿಗೆ ..

ಭಗತ್ ಸಿಂಗ್ ಎಂದರೆ

ಸಿಂಗರಿಸಿದ ಸುಳ್ಳುಗಳ ವಿರುದ್ಧ

ನಿಶಸ್ತ್ರ ಸತ್ಯಗಳ

ನಿರಂತರ ಸಮರ ..

ಇದೋ ಈಗ

ಇತಿಹಾಸ ಸುತ್ತು ಸುತ್ತಿ

ಮತ್ತೆ ಮರಳಿದೆ….

ಕರಿಬಿಳಿಯ ಕಲಬೆರಕೆಯ

ಮಬ್ಬುಗತ್ತಲ ವಂಚನೆಗೆ..

ಸೂರ್ಯೋದಯವೆಂದು ಹೆಸರಿಡಲಾಗಿದೆ…!

ಕಾವಿಲ್ಲದ ಬೆಳಕಿಂದ

ಮತ್ತೆ

ಕತ್ತಲು ಹೆಪ್ಪುಗಟ್ಟುತ್ತಿದೆ…

ಭಗತ್ ಸಿಂಗನ ಗಳಿಗೆ

ಮತ್ತೆ ಮರಳಿದೆ..

ಸುಳ್ಳಿನ ಸಂಸತ್ತಿನಲ್ಲಿ

ಸತ್ಯ ಸ್ಪೋಟಿಸಬೇಕಿದೆ ..

ಬಣ್ಣ ಬಣ್ಣಗಳ ಬೆಚ್ಚಗಿನ

ಕಂಫರ್ಟ್ ಜೋನುಗಳಲ್ಲಿ

ತುಸುವಾದರೂ

ಚಡಪಡಿಕೆ ಹುಟ್ಟಬೇಕಿದೆ ..

ಪ್ರತಿಮನದ ಮೌನ ಸ್ಮಶಾನದಲ್ಲಿ

ಭಗತ್ ಸಿಂಗನ ಬಾಂಬು ಸ್ಪೋಟಿಸಿ

ಸತ್ಯ ಮಾತಾಡಬೇಕಿದೆ ..

ಭಗತ್ ಸಿಂಗನ ಗಳಿಗೆ

ಮತ್ತೆ ಮರಳಿದೆ

 

-ಶಿವಸುಂದರ್

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |     ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್: A14 ಪ್ರದೋಷ್ ‘ಮಾಫಿ ಸಾಕ್ಷಿ’ ಅರ್ಜಿ ಸಲ್ಲಿಕೆ     |     ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ದಾಖಲೆ: ಭಾವನಾ ಕಾಂತ್‌ಗೆ ಪ್ರತಿಷ್ಠಿತ Fighter Combat Leader ಅರ್ಹತೆ     |     ‘ತೆಹೆಲ್ಕಾ’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ     |     ನಾಗ್ಪುರದಲ್ಲಿ ವಿದ್ಯಾರ್ಥಿನಿ ಅಪಹರಣ-ಅತ್ಯಾಚಾರ; ಊಟದ ಆರ್ಡರ್ ಪೊಲೀಸರಿಗೆ ನೀಡಿತು ಮಹತ್ವದ ಸುಳಿವು     |     ಹಾರ್ಮುಜ್ ಜಲಸಂಧಿ ವಿವಾದ ತೀವ್ರ: ಅಮೆರಿಕ ಹೇಳಿಕೆಗೆ ಇರಾನ್ ತಿರುಗೇಟು – ‘ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವಿಲ್ಲ’     |     ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: 5.25% ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ     |     ‘ಮೋದಿ ಪ್ರಧಾನಿ ಸ್ಥಾನ ತೊರೆದು ಇನ್‌ಫ್ಲುಯೆನ್ಸರ್ ಆಗಲಿ’ – ನೀಟ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಭಿಜೀತ್ ದೀಪ್ಕೆ ವಿವಾದಾತ್ಮಕ ಹೇಳಿಕೆ     |     ಆಗಸ್ಟ್‌ 3ಕ್ಕೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್–ವಿಜಯ್ ಭೇಟಿ? ವಿಧಾನಸೌಧದಲ್ಲಿ ಭರ್ಜರಿ ಸಿದ್ಧತೆ     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें