2026 ಫೆಬ್ರವರಿ,11 ರಂದು ಚಾಮರಾಜ ನಗರ ಜಿಲ್ಲಾ ಕೇಂದ್ರದಲ್ಲಿ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK) ವತಿಯಿಂದ ಹಮ್ಮಿಕೊಂಡಿರುವ ಆರೋಗ್ಯ ಹಕ್ಕಿನ ಜಾಥಾ (Right to Health Act Jatha) ಕಾರ್ಯಕ್ರಮದಲ್ಲಿ ಜಿಲ್ಲೆಯ ಆದಿವಾಸಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಚಾಮರಾಜ ನಗರ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ದ ಮುಖಂಡರೊಂದಿಗೆ ಚರ್ಚಿಸಲಾಯಿತು. ಜಿಲ್ಲೆಯ 5 ತಾಲೂಕುಗಳಿಂದ 100 ಕ್ಕೂ ಹೆಚ್ಚು ಆದಿವಾಸಿ ಮಹಿಳೆಯರು ಮತ್ತು ಮುಖಂಡರು ಭಾಗವಹಿಸಲು ನಿರ್ಧರಿಸಲಾಯಿತು. SAAK ಜಿಲ್ಲಾ ಪ್ರತಿನಿಧಿ ಮಹಾದೇವ ಸಿ ಕಾರ್ಯಕ್ರಮದ ವಿವರ ನೀಡಿದರು.
ಜಿಲ್ಲಾ ಸಂಘದ ಅಧ್ಯಕ್ಷರಾದ ರಂಗೇಗೌಡ, ಕಾರ್ಯದರ್ಶಿ, ಡಾ.ಮಾದೇಗೌಡ, ಜಂಟಿ ಕಾರ್ಯದರ್ಶಿ ಮಹದೇವಯ್ಯ, ಜಿಲ್ಲಾ ಆದಿವಾಸಿ ಆರೋಗ್ಯ ಸಮಿತಿ ಅಧ್ಯಕ್ಷರಾದ ರಾಜಪ್ಪ, ಕರ್ನಾಟಕ ರಾಜ್ಯ ಅರಣ್ಯಾಧಾರಿತ ಮೂಲ ಆದಿವಾಸಿ ಸಂಘಟನೆಗಳ ಒಕ್ಕೂಟದ ಸಂಯೋಜಕ ಮುತ್ತಯ್ಯ ವಿ, ಮಾದಯ್ಯ (ಮಾದು), ಗಿರೀಶ್ ಕುಮಾರ್, ಕಮಲ ಕರ, ಗಾರೆ ರಂಗಣ್ಣ, ಶಾಮ,ಡಾ. ರತ್ನಮ್ಮ,ಮಹಾದೇವಿ, ಶಿವಣ್ಣ, ಹೆಲ್ತ್ ನ್ಯಾವಿಗೇಟರ್ ಬೇಬಿ, ವರಲಕ್ಷ್ಮಿ ಮಹೇಶ್ವರಿ, ಲಕ್ಷ್ಮಿ, ಇನ್ಸ್ಟಿಟ್ಯೂಟ್ ಆಪ್ ಪಬ್ಲಿಕ್ ಹೆಲ್ತ್ ಪ್ರವೀಣ್ ರಾವ್ ಮುಂತಾದವರು ಹಾಜರಿದ್ದರು.
